Monday, December 13, 2021

*ಜ್ಞಾನೋದ್ದೀಪನ *

 *ಜ್ಞಾನೋದ್ದೀಪನ *

×××××××××××××××××××××


:ಅವಿವೇಕದ   ಪರಮಾವಧಿ :

++++++++++++++++++++


        ಆತ್ಮೀಯ ಬಂಧು_ಭಗಿನಿಯರೇ,

                 ತಮ್ಮ ಆತ್ಮಾವಲೋಕನಪೂರ್ವಕ ಯೋಚನಾಲಹರಿಗಾಗಿ :

ನಾವು ಮಾನವಧರ್ಮ ಪಥವನ್ನೇಕೆ ಧಿಕ್ಕರಿಸಿದ್ದೇವೆ?


ನಮಗೆ ಹಣ ಬೇಕು! ಗುಣಬೇಢ!


ನಮಗೆ ದುಡ್ಡುಬೇಕು! ಶಾಂತಿ ಬೇಡ!


ನಮಗೆ ದುಡ್ಡುಬೇಕು! ಸುಖ ಬೇಡ!


ನಮಗೆ ನಿಧಿ ಬೇಕು!

 ನೀತಿ - ನಿಯತ್ತು ಬೇಡ!


ನಮಗೆ ಧನ ಬೇಕು! ಧರ್ಮ ಬೇಡ!


ನಮಗೆ ಸಂಪತ್ತು ಬೇಕು!

ಸಮಾಧಾನ ಬೇಡ!


ನಮಗೆ ಮೊಬಲಗಿನ ಮೊತ್ತ ಬೇಕು!

ಮನೋಮೌಲ್ಯ ಬೇಡ!


ನಮಗೆ ವಿತ್ತ ಬೇಕು! ವಿಚಾರ ಬೇಡ!


ನಮಗೆ ಅಧಿಕಾರ ಬೇಕು!

ಜನಾಭಿವೃದ್ಧಿ ಬೇಡ!


ನಮಗೆ ಸನ್ಮಾನ ಬೇಕು!

      ಸಂಸ್ಕಾರ ಬೇಡ!


ಅಂತೆಯೇ,

               ನಮಗೆ ಮೂಗು ಕೊಟ್ಟ ದೇವರು ಬೇಡ!

ಆದರೆ,

         ಮೂಗುತಿ ಕೊಡುವ ದೇವರು ಬೇಕು!


ಇದೆಂಥಾ ವಿಪರ್ಯಾಸ ಸ್ವಾಮಿ?


ಪ್ರಣಾಮಗಳೊಂದಿಗೆ :

                   ಜಿ. ಎಂ. ಆರ್.

ಆನೇಕಲ್

No comments:

Post a Comment