* ಅಕ್ಷರ ಲಕ್ಷ ಶಾಸ್ತ್ರ *
:::::::::::::::::::::::::::::::::::::::
ಇದು ಸರ್ವಶಾಸ್ತ್ರ ಗ್ರಂಥ /ಸರ್ವ ಜ್ಞಾನ ಕೋಶ (Encyclopedia) ಆಗಿದೆ.
ಇದನ್ನು ಭಗವಾನ್ ವಾಲ್ಮೀಕಿ ಮಹರ್ಷಿ ಬರೆದಿದ್ದಾರೆ.
ಈ ಸಮಗ್ರ ಗ್ರಂಥದಲ್ಲಿ ಈ ಕೈಳಗೆ ನಮೂದಿಸಿರುವ ಜ್ಞಾನ ಶಾಖೆಗಳಿವೆ :
*325 ಗಣಿತ ಪ್ರಕ್ರಿಯೆಗಳು
*ರೇಖಾ ಗಣಿತ
,*ತ್ರಿಕೋನ ಗಣಿತ
*ಬೀಜ ಗಣಿತ
*ಖನಿಜ ಶಾಸ್ತ್ರ
*ಭೌತಿಕ ಶಾಸ್ತ್ರ
*ಜಲ ಯಂತ್ರ ಶಾಸ್ತ್ರ
*ಭೂಗರ್ಭ ಶಾಸ್ತ್ರ
*ವಾಯು ಶಾಸ್ತ್ರ
*ಉಷ್ಣ ಶಾಸ್ತ್ರ
*ವಿದ್ಯುತ್ ಶಾಸ್ತ್ರ
ಗಳನ್ನೊಳಗೊಂಡಂತೆ ಇದೊಂದು ಪರಿಶುದ್ಧ ವಿಜ್ಞಾನ
(Pure Science) ಶಾಸ್ತ್ರವಾಗಿದೆ.
ಸಶೇಷ..........
ಪ್ರಣಾಮಗಳೊಂದಿಗೆ :
ಜಿ. ಎಂ. ಆರ್.
ಆನೇಕಲ್.
2.*ಅರ್ಥಶಾಸ್ತ್ರ.
ಮಾನವನ ಸುಖಕರ ಜೀವನಾಂಶದ ಗಳಿಕೆ. ಬಳಕೆ. ಉಳಿಕೆ ಗಳಿಗೆ ಸಂಬಂಧಿಸಿದಂತಹ 82 ವಿಧಾನಗಳನ್ನು ಅರ್ಥಶಾಸ್ತ್ರದಲ್ಲಿ ತಿಳಿಸಲಾಗಿದೆ.
ವಿಷ್ಣುಶರ್ಮಾ /ಚಾಣಕ್ಯ /ಕೌಟಿಲ್ಯ ಈ ಭಾರತೀಯ ಮಾದರಿಯಲ್ಲಿ ಅರ್ಥಶಾಸ್ತ್ರವನ್ನು ಬರೆದಿದ್ದಾರೆ.
ಕೌಟಿಲ್ಯನ ಅರ್ಥಶಾಸ್ತ್ರ ಕೇವಲ ಆರ್ಥಿಕ ವಿಷಯಗಳನ್ನೇ ಅಲ್ಲದೆ ಸರ್ವ ಕ್ಷೇತ್ರಗಳ ವಿಚಾರಗಳನ್ನೊಳಗೊಂಡಿರುವ ಸಮಗ್ರ ಶಾಸ್ತ್ರವಾಗಿದೆ.
ಮಾನವನ ಆರ್ಥಿಕ ಚಟುವಟಿಕೆಗಳನ್ನು ಪ್ರತ್ಯೇಕವಾಗಿ ಅರಿಯಲು ಪೂರಕವಾದಂತೆ ಅರ್ಥಶಾಸ್ತ್ರವನ್ನು " ಸಂಪತ್ತಿನ ರಾಷ್ಟ್ರಗಳು" ಎಂಬ ಶೀರ್ಷಿಕೆಯಲ್ಲಿ ಬರೆದು 1776 ರಲ್ಲಿಯೇ ವ್ಯಾಖ್ಯಾನಿಸಿರುವವರು ಇಂಗ್ಲೆಂಡ್ ನ ಆಡಂ ಸ್ಮಿತ್ ರವರು.
ವ್ಯಕ್ತಿ ಜೀವಂತವಾಗಿರಲು ರಕ್ತಪರಿಚಲನೆ ಎಷ್ಟು ಪ್ರಮುಖವೋ, ರಾಷ್ಟ್ರ ದ ಸರ್ವಾಭಿವೃದ್ಧಿಗೆ ಆರ್ಥಿಕ ಚಟುವಟಿಕೆಗಳು ಅಷ್ಟೇ ಪ್ರಮುಖವಾಗಿವೆ.
2.*ಅರ್ಥಶಾಸ್ತ್ರ.
ಮಾನವನ ಸುಖಕರ ಜೀವನಾಂಶದ ಗಳಿಕೆ. ಬಳಕೆ. ಉಳಿಕೆ ಗಳಿಗೆ ಸಂಬಂಧಿಸಿದಂತಹ 82 ವಿಧಾನಗಳನ್ನು ಅರ್ಥಶಾಸ್ತ್ರದಲ್ಲಿ ತಿಳಿಸಲಾಗಿದೆ.
ವಿಷ್ಣುಶರ್ಮಾ /ಚಾಣಕ್ಯ /ಕೌಟಿಲ್ಯ ಈ ಭಾರತೀಯ ಮಾದರಿಯಲ್ಲಿ ಅರ್ಥಶಾಸ್ತ್ರವನ್ನು ಬರೆದಿದ್ದಾರೆ.
ಕೌಟಿಲ್ಯನ ಅರ್ಥಶಾಸ್ತ್ರ ಕೇವಲ ಆರ್ಥಿಕ ವಿಷಯಗಳನ್ನೇ ಅಲ್ಲದೆ ಸರ್ವ ಕ್ಷೇತ್ರಗಳ ವಿಚಾರಗಳನ್ನೊಳಗೊಂಡಿರುವ ಸಮಗ್ರ ಶಾಸ್ತ್ರವಾಗಿದೆ.
ಮಾನವನ ಆರ್ಥಿಕ ಚಟುವಟಿಕೆಗಳನ್ನು ಪ್ರತ್ಯೇಕವಾಗಿ ಅರಿಯಲು ಪೂರಕವಾದಂತೆ ಅರ್ಥಶಾಸ್ತ್ರವನ್ನು " ಸಂಪತ್ತಿನ ರಾಷ್ಟ್ರಗಳು" ಎಂಬ ಶೀರ್ಷಿಕೆಯಲ್ಲಿ ಬರೆದು 1776 ರಲ್ಲಿಯೇ ವ್ಯಾಖ್ಯಾನಿಸಿರುವವರು ಇಂಗ್ಲೆಂಡ್ ನ ಆಡಂ ಸ್ಮಿತ್ ರವರು.
ವ್ಯಕ್ತಿ ಜೀವಂತವಾಗಿರಲು ರಕ್ತಪರಿಚಲನೆ ಎಷ್ಟು ಪ್ರಮುಖವೋ, ರಾಷ್ಟ್ರ ದ ಸರ್ವಾಭಿವೃದ್ಧಿಗೆ ಆರ್ಥಿಕ ಚಟುವಟಿಕೆಗಳು ಅಷ್ಟೇ ಪ್ರಮುಖವಾಗಿವೆ.
::::::::::::::::::::::
ಈ ಶಾಸ್ತ್ರವನ್ನು
ಅಗ್ನಿವರ್ಮ ಬರೆದಿದ್ದಾರೆ.
ಅಶ್ವ (ಕುದುರೆ) ಗಳ ವಿಧಗಳು
ಶುಭಾಶುಭ ಚಿಹ್ನೆಗಳು. ಅವುಗಳ ಓಟದ ರೀತಿಗಳು
ಅವು ಎತ್ತರಕ್ಕೆ ಹತ್ತುವ ಮತ್ತು ನದಿಗಳನ್ನು ದಾಟುವ ಸಾಹಸಗಳನ್ನು ತಿಳಿಸಿದೆ.
ಸಾಮಂತ ರಾಜಮಹಾರಾಜರು
ಕುದುರೆಗಳನ್ನು ಯಜ್ಞ_ಯಾಗಾದಿಗಳಿಗೆ ಕುದುರೆ ಗಳನ್ನು ಬಳಸುತ್ತಿದ್ದಂತಹ ವಿಚಾರಧಾರೆ ಈ ಶಾಸ್ತ್ರದ ವಿಚಾರ ವಿನಿಮಯವಾಗಿದೆ.
4* ಅಸ್ತ್ರ ಶಾಸ್ತ್ರ *
******
ಈ ಶಾಸ್ತ್ರವನ್ನು ಬ್ರಹ್ಮರ್ಷಿವರೇಣ್ಯರಾದ ವಿಶ್ವಾಮಿತ್ರ ಬರೆದಿದ್ದಾರೆ.
ಮಂತ್ರಪೂರಿತ ಧನಸ್ಸಿಗೆ ಅಸ್ತ್ರ ಎನ್ನಲಾಗಿದೆ.
ಬ್ರಹ್ಮಾಸ್ತ್ರ. ವಾರುಣಾಸ್ತ್ರ. ನಾರಾಯಣಾಸ್ತ್ರ. ಆಗ್ನೇಯಾಸ್ತ್ರ
ಮತ್ತು ಪಾಶುಪತಾಸ್ತ್ರ ಮುಂತಾದವು ಮಹಾಮಹಿಮೆಯುಳ್ಳ ದಿವ್ಯಾಸ್ತ್ರಗಳಾಗಿವೆ.
ಇಂತಹ ಮಹಾ ಅಸ್ತ್ರಗಳ ಪ್ರಯೋಗ ಮತ್ತು ಉಪಸಂಹಾರಗಳನ್ನು ಉಪ ವೇದವಾದ ಧನುರ್ವೇದದಲ್ಲಿ ವಿವರಿಸಲಾಗಿದೆ.
5* ಇಂದ್ರಜಾಲ ಶಾಸ್ತ್ರ
********
ಈ ತಂತ್ರ ಶಾಸ್ತ್ರವನ್ನು ವೀರಬಾಹು ಬರೆದಿದ್ದಾರೆ.
ಇದರಲ್ಲಿ ಗಾರುಡಿ ವಿದ್ಯೆಗಳು.
ಅನುಸರಿಸಬೇಕಾದ ಕ್ರಮಗಳು. ಪದ್ಧತಿಗಳು ಮತ್ತು ಜಾಗ್ರತೆಗಳನ್ನು ವಿವರಿಸಲಾಗಿದೆ.
ನೀರಿನ ಮೇಲೆ & ಬೆಂಕಿಯ ಮೇಲೆ ನಡೆಯುವುದು. ಅಂತೆಯೇ ಆಧಾರವಿಲ್ಲದೆ ಗಾಳಿಯಲ್ಲಿ ನಿಲ್ಲುವುದು ಮುಂತಾದ ಮಾಯಾಜಾಲ ವಿದ್ಯೆಗಳ ಬಗ್ಗೆ ಈ ಶಾಸ್ತ್ರದಲ್ಲಿ ತಿಳಿಸಲಾಗಿದೆ.
6* ಕನ್ಯಾಲಕ್ಷಣ ಶಾಸ್ತ್ರ.
:::::::::::::::::::::::::::::::::
ಈ ಶಾಸ್ತ್ರವನ್ನು ಬಬ್ರು ಮಹರ್ಷಿ
ಬರೆದಿದ್ದಾರೆ.
ಈ ಶಾಸ್ತ್ರದಲ್ಲಿ ವಿವಿಧ ರೀತಿಯ ಕನ್ಯೆಯರ ಗುಣಲಕ್ಷಣ. ಅವಲಕ್ಷಣ ಮತ್ತು ಗುಣಸಂಪನ್ನ ಮತ್ತು ಗುಣವಿಹೀನತೆಗಳ ಬಗ್ಗೆ ತಿಳಿಸಲಾಗಿದೆ.
ಪದ್ಮಿನಿ ಸ್ತೀಯ ಲಕ್ಷಣ :
******
ಹಂಸ ನಡಿಗೆ. ಮೃದು_ಮಧುರ
ಭಾಷಿಣಿ. ಸ್ತೀಕುಲದಲ್ಲಿಯೇ ಪರಮಶ್ರೇಷ್ಟಳಾಗಿದ್ದು ನೋಡಿದವರಿಗೆ ಪೂಜ್ಯಭಾವನೆ ಉಂಟಾಗುತ್ತದೆ.
ಮಿತಾಹಾರಿ. ಮಿತ ಕಾಮಾಸಕ್ತಳಾಗಿ ಪತಿಗೆ ಸಂಭಾವಿತ ಸಹಧರ್ಮಿಣಿಯಾಗಿ ಮಹಾಪತಿವ್ರತೆಯಾಗಿರುತ್ತಾಳೆ.
ಚಿತಿನಿ ಸ್ತೀಯ ಲಕ್ಷಣ :
******
ಚಂಚಲ ದೃಷ್ಟಿ & ಸ್ವಭಾವದವಳಾಗಿರುತ್ತಾಳೆ.
ದಪ್ಪ ತುಟಿಗಳು& ಮೀನಿನ ಕಣ್ಣುಗಳುಳ್ಳವಳಾಗಿರುತ್ತಾಳೆ.
ಕಾಮನೆಗಳ ಮಿಡಿತದಲ್ಲಿ ಮನೋನಿಯಂತ್ರಣವಿಲ್ಲದೆ ವರ್ತಿಸುವವಳಾಗಿರುತ್ತಾಳೆ.
ಶಂಖಿನಿ ಸ್ತೀಯ ಲಕ್ಷಣ :
*******
ಪರರಬಗ್ಗೆ ಓರೆನೋಟ ಬರುವವಳು.
ರಕ್ತನೇತ್ರಗಳನ್ನುಳ್ಳವಳು. ಲಜ್ಜೆಯಿಲ್ಲದ ನಗುಮುಖದವಳು ಗೊಗ್ಗರ ಧ್ವನಿ ಯುಳ್ಳವಳು. ಅತಿಕಾಮಾಸಕ್ತಳಾಗಿರುತ್ತಾಳೆ.
ಹಸ್ತಿನಿ ಸ್ತೀಯ ಲಕ್ಷಣ:
*******
ದೊಡ್ಡಮುಖ. ಡೊಂಕಾದ ಕಾಲು ಬೆರಳುಗಳನ್ನುಳ್ಳವಳಾಗಿದ್ದು ಲಜ್ಜಾಹೀನಳು & ಅತೀಮಾತುಗಾರಳಾಗಿರುತ್ತಾಳೆ. ಅತಿ ಶೃಂಗಾರ ಪ್ರಿಯಳಾಗಿ ಸದಾ ಕಾಮೋನ್ಮಾದದಲ್ಲಿ ತೊಡಗಿರುತ್ತಾಳೆ.
7.*ಕಾಮಶಾಸ್ತ್ರ.
:::::::::::::::::::::::::
ಈ ಶಾಸ್ತ್ರವನ್ನು ವಾತ್ಸಾಯನ ಮಹರ್ಷಿ ಬರೆದಿದ್ದಾರೆ
ಇದರಲ್ಲಿ ರತಿಕ್ರಿಯಾಭಂಗಿ. ಸ್ತ್ರೀ ಪುರುಷ ಮನಸ್ಸತ್ವಗಳು. ರತಿಸಂಕೇತಗಳು & ಲೈಂಗಿಕ ತೃಷೆ ಈಡೇರಿಕೆಯ ಸಂಗತಿಗಳಿವೆ. ಆರೋಗ್ಯ ಪದ್ಧತಿ & ದೇಹ ಶಕ್ತಿ ವೃದ್ಧಿಸಿಕೊಳ್ಳುವ ಬಗ್ಗೆ ವಿವರಣೆ ಇದೆ.
8.* ಕಾಲಶಾಸ್ತ್ರ :
******
ಇದನ್ನು ಕಾರ್ತಿಕೇಯ ಮಹರ್ಷಿ
ಬರೆದಿದ್ದಾರೆ.
ಇದರಲ್ಲಿ ಸಮಯವನ್ನು ಕ್ಷಣ _ನಿಮಿಷ _ಘಂಟೆ _ದಿನ _ಆಯನ _ವರ್ಷ ಮುಂತಾಗಿ ವಿಭಜಿಸಲಾಗಿದೆ. ಶುಭಾಶುಭ ಸಮಯ & ಸಮಯ ದೇವತೆಗಳ ಬಗ್ಗೆ ವಿವರಿಸಲಾಗಿದೆ.
Library is the Temple of Knowledge.
ಓದಿನ ಹಿರಿಮೆ ನಮ್ಮ ಬದುಕಿನ
ಮಹಿಮೆ.
ಅಂತೆಯೇ,
ಮೊಬೈಲ್ ಫೋನ್ ಬಿಡಿ. ಪುಸ್ತಕ ಹಿಡಿ.
9.* ಗಜ ಶಾಸ್ತ್ರ.
::::::::::::::::::::
ಈ ಶಾಸ್ತ್ರವನ್ನು ಕುಮಾರಸ್ವಾಮಿ
ಬರೆದಿದ್ದಾರೆ.
ಇದರಲ್ಲಿ ಆನೆಗಳ ವಿವಿಧ ಜಾತಿಗಳು. ಶಾರೀರಿಕ ಲಕ್ಷಣಗಳು. ಕಾಡಾನೆಗಳನ್ನು ಸ್ವಾಧೀನಪಡಿಸಿಕೊಳ್ಳುವ ವಿಧಾನಗಳು. & ಆನೆಗಳ ಮನಸ್ಸು ತಿಳಿಯುವ ಪದ್ಧತಿಗಳನ್ನು ವಿವರಿಸಲಾಗಿದೆ.
10.*ಗಂಧರ್ವ ಶಾಸ್ತ್ರ.
:::::::::::::::::::::::::::
ಈ ಶಾಸ್ತ್ರವನ್ನು ಭರತಮುನಿ ಬರೆದಿದ್ದಾರೆ.
ಇದರಲ್ಲಿ ನಾಟ್ಯ. ಸಂಗೀತ. ಗಾಯನ. ವಾದ್ಯತಾಳಗಳು. ನೃತ್ಯ ಶೈಲಿಗಳು. ಲಲಿತ ಕಲೆಗಳು
ಮುಂತಾದವುಗಳ ಬಗ್ಗೆ ವಿವರಿಸಲಾಗಿದೆ.
11.* ಚಿತ್ರ ಲೇಖನ ಶಾಸ್ತ್ರ.
:::::::::::::::::::::::::::::::
ಇದನ್ನು ಭೀಮಋಷಿ ಬರೆದಿದ್ದಾರೆ.
ಚಿತ್ರ ಲೇಖನ ರಹಸ್ಯಗಳು ಈ ಶಾಸ್ತ್ರದಲ್ಲಿದೆ.
ಮನುಷ್ಯನ ಕೂದಲು & ಉಗುರುಗಳನ್ನು ನೋಡಿ ಮನುಷ್ಯನ ಚಿತ್ರವನ್ನು ಯಥಾವತ್ತಾಗಿ ಬರೆಯುವ ವಿಧಾನ ತಿಳಿಸಲಾಗಿದೆ.
200 ಚಿತ್ರಗಳ ವಿನ್ಯಾಸ ರಹಸ್ಯಗಳನ್ನು ತಿಳಿಸಿದ್ದಾರೆ.
ಪ್ರಣಾಮಗಳೊಂದಿಗೆ :
ಜಿ. ಎಂ. ಆರ್.
ಆನೇಕಲ್.
No comments:
Post a Comment