Friday, August 23, 2019

Knowledge Article 9:ಮಾನವನ ಜೀವನ ಸುಗ್ಗಿ :

*ಜ್ಞಾನೋದ್ದೀಪನ *
:::::::::::::::::::::::::::::::::::::::::::::

:ಮಾನವನ ಜೀವನ ಸುಗ್ಗಿ :
*********

         ತಮಿಳುನಾಡಿನ  ದಾರ್ಶನಿಕ ಕವಿ ತಿರುವಳ್ಳುವರ್ ರವರು  ಸುಗ್ಗಿ ಹಬ್ಬದಂತಹ ಹಿಗ್ಗಿ ನ ಜೀವನ ಶೈಲಿಯನ್ನು ಪುಷ್ಕರಿಸುವ ವಿಚಾರಧಾರೆ ಇಂತಿದೆ :

            ನಮ್ಮ ದೇಹದ ಹೃದಯವೈಶಾಲತೆಯು ಮೈದಾನವಿದ್ದಂತೆ.
     
               ನಮ್ಮಲ್ಲಿನ ಸ್ವಯಂ ಶಿಸ್ತು ಆ ಮೈದಾನದಕ್ಕೆ ಬೇಲಿಯಿದ್ದಂತೆ.

               ನಮ್ಮಲ್ಲಿರುವ ಲೌಕಿಕ ಲಾಲಸೆಯನ್ನು ತೊರೆಯುವುದು ಹಸನಾದ ಬೆಳೆಯಿಂದ ಕಸವ        (ಕಳೆಯ) ನ್ನು ಬೇರ್ಪಡಿಸಿದಂತೆ.

             ಭಾವೋದ್ಧೀಪನವನ್ನು       ಅನ್ವಯಿಸಿಕೊಳ್ಳುವುದೆಂದರೆ ಬೆಳೆಯನ್ನು ಬೆಳೆಯಲು ಮೈದಾನ ವನ್ನು ಉಳುಮೆ ಮಾಡಿದಂತೆ.

            ನಮ್ಮ ಪವಿತ್ರ ಆಲೋಚನೆಯು ಬಿತ್ತನೆ ಬೀಜವಿದ್ದಂತೆ.

                  ನಾವು ಬೆಳೆದಂತಹ ಬೆಳೆಯು ತೀವ್ರವಾದ ಉತ್ಸಾಹ - ಸಂಭ್ರಮ ದಂತೆ.

          ನಮ್ಮಲ್ಲಿನ  ದೈವಿಕ ಹರ್ಷೋನ್ಮಾದವೇ ಸುಗ್ಗಿ  ಆಗಿದೆ.

ಪ್ರಣಾಮಗಳೊಂದಿಗೆ :
 ಜಿ. ಎಂ. ಆರ್.
ಆನೇಕಲ್.

No comments:

Post a Comment