*ಜ್ಞಾನೋದ್ದೀಪನ *
====================
:ಗೃಹಸ್ಥ ಜೀವನದ ಗರಿಮೆ :
×××××××××××××××××××
ಏಕ ಪತ್ನಿ /ಪತಿ ಶ್ರೇಯ:
ದ್ವಿಪತ್ನಿ /ಪತಿ ಭಯಾವಹ:
Two Lovers meet in the morning.
They marry in the afternoon.
But, They divorced in the
evening.
ಈ ರೀತಿಯ Aculturation ಪಾಶ್ಚಿಮಾತ್ಯ ದೇಶಗಳಲ್ಲಿ ಓತಾಪ್ರೋತವಾಗಿ ರೂಡಿಯಲ್ಲಿರುವುದು ಅವರ ಅಭಿರುಚಿಗೆ ಸೀಮಿತ.
ಕೃಣ್ವಂತೋ ವಿಶ್ವಮಾರ್ಯಂ ಅರ್ಥಾತ್ ವಿಶ್ವದ ಜನರನ್ನೆಲ್ಲಾ ಸುಸಂಸ್ಕಾರಸ್ಥರನ್ನಾಗಿಸೋಣ ಎಂದು ಬಯಸಿ ವಿಶ್ವ ಗುರುವಿನಂತಿರುವ ಭಾರತದಲ್ಲಿ ದುರಾದೃಷ್ಟವಶಾತ್ ಇತ್ತೀಚಿನ ದಿನಗಳಲ್ಲಿ ಹಿಂದೂ ವಿವಾಹದ ಪರಮ ಪಾವನವಾದ ಪದ್ಧತಿ ಅನುಸಾರ ಗೃಹಸ್ಥ ಜೀವನಕ್ಕೆ ಕಾಲಿಟ್ಟ ನವಪೀಳಿಗೆಯ ವಧುವರಮಹಿಮಾನ್ವಿತರು ತಮ್ಮ ಜನ್ಮಧಾತರು ಹಾಗೂ ಗುರು-ಹಿರಿಯರಸಮ್ಮುಖದಲ್ಲಿ ಶುಭಮಂಗಳಕರವಾಗಿ ಮಾಂಗಲ್ಯಧಾರಣೆ ಮೂಲಕ ಪತಿಪತ್ನಿಯಾಗಿ ಧಾಂಪತ್ಯ ಜೀವನವೆಂಬ ನೌಕೆಯನ್ನು ಗೃಹಸ್ಥ ಆಶ್ರಮವೆಂಬ ಸಾಗರದಲ್ಲಿ ಸಾಗಿಸಿ ಯುಕ್ತ ಜೀವನವನ್ನು ಶಕ್ತಗೊಳಿಸುವ ಬದಲಾಗಿ ಪಾಶ್ಚಿಮಾತ್ಯ ಗೊಡ್ಡು ಸಂಸ್ಕೃತಿಗೆ ಮಾರು ಹೋಗಿ ಕ್ಷುಲ್ಲಕ ಕಾರಣಗಳಿಗಾಗಿ ಗಂಡನಾದವ ತನ್ನ ಹೆಂಡತಿಯನ್ನು ಅಥವಾ ಹೆಂಡತಿಯಾದವಳು ತನ್ನ ಗಂಡನನ್ನು ಧಿಕ್ಕರಿಸಿ ತೊರೆಯುವುದು ನಮ್ಮ ಧರ್ಮ ಹಾಗೂ ಸಂಸ್ಕೃತಿಗೆ ದ್ರೋಹ ಬಗೆದಂತಾಗುತ್ತದೆ.
ಗಂಡನೇ ಆಗಲಿ ಇಲ್ಲವೇ ಹೆಂಡತಿಯೇ ಆಗಲಿ ತನಗೆ ಬೇರೆ ತಾಯಿ ಬೇಕೆಂದು ಬದಲಿಸಲು ಸಾಧ್ಯವೇ? ನನ್ನ ತಾಯಿ ಸುಂದರವಾಗಿಲ್ಲ. ಶ್ರೀಮಂತಳಲ್ಲ. ನಾನು ಬಯಸಿದಂತಿಲ್ಲ ಎಂದು ತಾಯಿಯನ್ನು ಎಂದಿಗೂ ಬದಲಿಸಲು ಸಾಧ್ಯವೇ ಇಲ್ಲ. ಏಕೆಂದರೆ, ನಮ್ಮ ಜನನ ಪೂರ್ವದಲ್ಲಿಯೇ ಆಕೆ ನಮ್ಮನ್ನು ಮಗುವಾಗಿ ಸ್ವೀಕರಿಸಿ ಹೇಗೆ ಆಕೆ ನಮ್ಮ ಜೀವನ ಪರ್ಯಂತ ತಾಯಿಯಾಗಿರುತ್ತಾಳೆಯೋ ಹಾಗೆಯೇ ದೈವಾನುಗ್ರಹಯುಕ್ತ
ಪತಿಗೆ ಪತ್ನಿ ಹಾಗೂ ಪತ್ನಿಗೆ ಪತಿ ಆಗಿ ಗಂಡ - ಹೆಂಡತಿ ಆದವರೂ ಸಹಾ ಗೃಹಸ್ಥರಾಗಿ ಸಾಕ್ಷಾತ್ಕಾರದಿಂದ ಒಲವಿನ ಅನುಬಂಧದಿಂದ ಆದರ್ಶನೀಯವಾಗಿ ಬದುಕಿ ಹಿಂದೂ ಸಂಸ್ಕೃತಿಯನ್ನು ಉಳಿಸಿ ಶ್ರೀಮಂತಗೊಳಿಸುವುದರೊಂದಿಗೆ ಕುಟುಂಬಗಳಲ್ಲಿ ಶಾಂತಿ. ನೆಮ್ಮದಿ ಸಾಮರಸ್ಯಕ್ಕೆ ಪುಷ್ಠಿಧಾಯಕರಾಗುವುದು ಪರಮೋತ್ಕಷ್ಠ.
ಮಾನಿನಿಗೆ ಗಂಜೀಯ ಕುಡಿದಾರೂ ಗಂಡನಾ ಮನೆ ಲೇಸು ಎಂಬ ಅರಿವಿನೊಂದಿಗೆ ತಾಳ್ಮೆ ಇರಬೇಕು.
ಅಂತೆಯೇ "
ಗಂಡನಾದ ಮಹನಿಯನಿಗೆ ತನ್ನ ಹೆಂಡತಿಯೇ ಜೀವನದ ಸಂಗಾತಿಯಾಗಿದ್ದು ಕೊನೇ ಕ್ಷಣದಲ್ಲಿಯೂ ಸನಿಹವಿದ್ದು ಸಂತೈಸುವ ಸಾಧ್ವಿಮಣಿಯಾಗಿರುತ್ತಾಳೆಂಬ ಅರಿವಿನೊಂದಿಗೆ ಗಂಭೀರ ಜವಾಬ್ದಾರಿ ಇರಲೇಬೇಕು.
ಕುಟುಂಬ ಕೌಸ್ತುಭ ಮಸ್ತು.
ಪ್ರಣಾಮಗಳೊಂದಿಗೆ :
ಜಿ. ಎಂ. ಆರ್.
ಆನೇಕಲ್.
====================
:ಗೃಹಸ್ಥ ಜೀವನದ ಗರಿಮೆ :
×××××××××××××××××××
ಏಕ ಪತ್ನಿ /ಪತಿ ಶ್ರೇಯ:
ದ್ವಿಪತ್ನಿ /ಪತಿ ಭಯಾವಹ:
Two Lovers meet in the morning.
They marry in the afternoon.
But, They divorced in the
evening.
ಈ ರೀತಿಯ Aculturation ಪಾಶ್ಚಿಮಾತ್ಯ ದೇಶಗಳಲ್ಲಿ ಓತಾಪ್ರೋತವಾಗಿ ರೂಡಿಯಲ್ಲಿರುವುದು ಅವರ ಅಭಿರುಚಿಗೆ ಸೀಮಿತ.
ಕೃಣ್ವಂತೋ ವಿಶ್ವಮಾರ್ಯಂ ಅರ್ಥಾತ್ ವಿಶ್ವದ ಜನರನ್ನೆಲ್ಲಾ ಸುಸಂಸ್ಕಾರಸ್ಥರನ್ನಾಗಿಸೋಣ ಎಂದು ಬಯಸಿ ವಿಶ್ವ ಗುರುವಿನಂತಿರುವ ಭಾರತದಲ್ಲಿ ದುರಾದೃಷ್ಟವಶಾತ್ ಇತ್ತೀಚಿನ ದಿನಗಳಲ್ಲಿ ಹಿಂದೂ ವಿವಾಹದ ಪರಮ ಪಾವನವಾದ ಪದ್ಧತಿ ಅನುಸಾರ ಗೃಹಸ್ಥ ಜೀವನಕ್ಕೆ ಕಾಲಿಟ್ಟ ನವಪೀಳಿಗೆಯ ವಧುವರಮಹಿಮಾನ್ವಿತರು ತಮ್ಮ ಜನ್ಮಧಾತರು ಹಾಗೂ ಗುರು-ಹಿರಿಯರಸಮ್ಮುಖದಲ್ಲಿ ಶುಭಮಂಗಳಕರವಾಗಿ ಮಾಂಗಲ್ಯಧಾರಣೆ ಮೂಲಕ ಪತಿಪತ್ನಿಯಾಗಿ ಧಾಂಪತ್ಯ ಜೀವನವೆಂಬ ನೌಕೆಯನ್ನು ಗೃಹಸ್ಥ ಆಶ್ರಮವೆಂಬ ಸಾಗರದಲ್ಲಿ ಸಾಗಿಸಿ ಯುಕ್ತ ಜೀವನವನ್ನು ಶಕ್ತಗೊಳಿಸುವ ಬದಲಾಗಿ ಪಾಶ್ಚಿಮಾತ್ಯ ಗೊಡ್ಡು ಸಂಸ್ಕೃತಿಗೆ ಮಾರು ಹೋಗಿ ಕ್ಷುಲ್ಲಕ ಕಾರಣಗಳಿಗಾಗಿ ಗಂಡನಾದವ ತನ್ನ ಹೆಂಡತಿಯನ್ನು ಅಥವಾ ಹೆಂಡತಿಯಾದವಳು ತನ್ನ ಗಂಡನನ್ನು ಧಿಕ್ಕರಿಸಿ ತೊರೆಯುವುದು ನಮ್ಮ ಧರ್ಮ ಹಾಗೂ ಸಂಸ್ಕೃತಿಗೆ ದ್ರೋಹ ಬಗೆದಂತಾಗುತ್ತದೆ.
ಗಂಡನೇ ಆಗಲಿ ಇಲ್ಲವೇ ಹೆಂಡತಿಯೇ ಆಗಲಿ ತನಗೆ ಬೇರೆ ತಾಯಿ ಬೇಕೆಂದು ಬದಲಿಸಲು ಸಾಧ್ಯವೇ? ನನ್ನ ತಾಯಿ ಸುಂದರವಾಗಿಲ್ಲ. ಶ್ರೀಮಂತಳಲ್ಲ. ನಾನು ಬಯಸಿದಂತಿಲ್ಲ ಎಂದು ತಾಯಿಯನ್ನು ಎಂದಿಗೂ ಬದಲಿಸಲು ಸಾಧ್ಯವೇ ಇಲ್ಲ. ಏಕೆಂದರೆ, ನಮ್ಮ ಜನನ ಪೂರ್ವದಲ್ಲಿಯೇ ಆಕೆ ನಮ್ಮನ್ನು ಮಗುವಾಗಿ ಸ್ವೀಕರಿಸಿ ಹೇಗೆ ಆಕೆ ನಮ್ಮ ಜೀವನ ಪರ್ಯಂತ ತಾಯಿಯಾಗಿರುತ್ತಾಳೆಯೋ ಹಾಗೆಯೇ ದೈವಾನುಗ್ರಹಯುಕ್ತ
ಪತಿಗೆ ಪತ್ನಿ ಹಾಗೂ ಪತ್ನಿಗೆ ಪತಿ ಆಗಿ ಗಂಡ - ಹೆಂಡತಿ ಆದವರೂ ಸಹಾ ಗೃಹಸ್ಥರಾಗಿ ಸಾಕ್ಷಾತ್ಕಾರದಿಂದ ಒಲವಿನ ಅನುಬಂಧದಿಂದ ಆದರ್ಶನೀಯವಾಗಿ ಬದುಕಿ ಹಿಂದೂ ಸಂಸ್ಕೃತಿಯನ್ನು ಉಳಿಸಿ ಶ್ರೀಮಂತಗೊಳಿಸುವುದರೊಂದಿಗೆ ಕುಟುಂಬಗಳಲ್ಲಿ ಶಾಂತಿ. ನೆಮ್ಮದಿ ಸಾಮರಸ್ಯಕ್ಕೆ ಪುಷ್ಠಿಧಾಯಕರಾಗುವುದು ಪರಮೋತ್ಕಷ್ಠ.
ಮಾನಿನಿಗೆ ಗಂಜೀಯ ಕುಡಿದಾರೂ ಗಂಡನಾ ಮನೆ ಲೇಸು ಎಂಬ ಅರಿವಿನೊಂದಿಗೆ ತಾಳ್ಮೆ ಇರಬೇಕು.
ಅಂತೆಯೇ "
ಗಂಡನಾದ ಮಹನಿಯನಿಗೆ ತನ್ನ ಹೆಂಡತಿಯೇ ಜೀವನದ ಸಂಗಾತಿಯಾಗಿದ್ದು ಕೊನೇ ಕ್ಷಣದಲ್ಲಿಯೂ ಸನಿಹವಿದ್ದು ಸಂತೈಸುವ ಸಾಧ್ವಿಮಣಿಯಾಗಿರುತ್ತಾಳೆಂಬ ಅರಿವಿನೊಂದಿಗೆ ಗಂಭೀರ ಜವಾಬ್ದಾರಿ ಇರಲೇಬೇಕು.
ಕುಟುಂಬ ಕೌಸ್ತುಭ ಮಸ್ತು.
ಪ್ರಣಾಮಗಳೊಂದಿಗೆ :
ಜಿ. ಎಂ. ಆರ್.
ಆನೇಕಲ್.
No comments:
Post a Comment